ವಿಶ್ವ ಏಡ್ಸ ದಿನಾಚರಣೆ-2018
ದಿನಾಂಕ 03.12.2018ರಂದು ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕಗಳು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ಹಾಗೂ ಜಿಲ್ಲಾ ಏಡ್ಸ ನಿಯಂತ್ರಣಾ ಘಟಕ, ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಜಾಥದಲ್ಲಿ ಎನ್.ಎಸ್.ಎಸ್. ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಬಳ್ಳಾರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಎಸ್.ಬಿ.ಅಂಧ್ರಾಳ್ ರವರು, ಜಿಲ್ಲಾಪರಿಷತ್ ಅಧ್ಯಕ್ಷರಾದ ಶ್ರೀಮತಿ.ಭಾರತಿ ತಿಮ್ಮಾರೆಡ್ಡಿ ಹಾಗೂ ಜಿಲ್ಲಾ ಏಡ್ಸ ನಿಯಂತ್ರಣಾ ಘಟಕದ ಮುಖ್ಯಸ್ಥರಾದ ಡಾ.ನಿಜಾಮುದ್ದೀನ್ ಜಾಥವನ್ನು ಉದ್ಘಾಟಿಸಿದರು.
ಬಳ್ಳಾರಿಯಲ್ಲಿರುವ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ವಿವಿಧ ಸಂಸ್ಥೆಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ನಗರದ ಪ್ರಮುಖ ರಸ್ತೆಗಳಲ್ಲಿ ಭಿತ್ತಿಪತ್ರಗಳನ್ನು ಹಾಗೂ ಹಾಡುಗಳ ಮುಖಾಂತರ ಜಾಥವನ್ನು ಯಶಸ್ವಿಗೊಳಿಸಿದರು. ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕದ ಕಾರ್ಯಕ್ರಮದ ಅಧಿಕಾರಿಗಳಾದ ಶ್ರೀ.ಯು.ಚಂದ್ರಶೇಖರ ಹಾಗೂ ಪ್ರಾಂಶುಪಾಲರು ಇದರಲ್ಲಿ ಪಾಲ್ಗೊಂಡಿದ್ದರು.